ಅಂದು ರೈಲ್ವೆ ಹಳಿಯ ಪಕ್ಕದಲ್ಲಿ ಬರಿಗಾಲಲ್ಲಿ ಈ ಸಂತ ನಡೆದಿದ್ದು ಬರೋಬ್ಬರಿ 15.5 ಕಿಲೋಮೀಟರ್ .
ಮಂಗಳೂರಿನ ಬಂದರಿನ ಗ್ಯಾರೇಜೊಂದರಲ್ಲಿ ಮೈಕ್ಯನಿಕ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಆತನಿಗೆ ನಾಟಕದ ವಿಪರೀತ ಗೀಳು . ತುಳು ಭಾಷೆಯಲ್ಲಿ ಹೇಳುವುದಾದರೆ ''ಗುಣ ಆವಂದಿನ ಮರ್ಲ್!''
'' ಕೊಂಡಾಣಡ್ ಇನಿ ''ತಮ್ಮಲೆ ಅರ್ವತ್ತನ ಕೋಲ'' ನಾಟಕ ಉಂಡು , ಭೂತ ದರ್ಶನದ ಕೆಂಪು ಅಂಗಿ ಅಲ್ಪ ಅಂಗಡಿಡ್ ದೀತೆ . ಕೆಲಸ ಮುಗಿದ್ ಬನ್ನಗ ಆ ಡ್ರೆಸ್ ಪತ್ತೊಂದು ಸರಿ ಆಜಿ ಗಂಟೆಗ್ ರೈಲ್ವೆ ಸ್ಟೇಷನ್ ಗ್ ಬಲ್ಲ ಎಂಕುಲು ಅಲ್ಪ ಕಾತೊಂದು ಉಪ್ಪುವ ''
ಕಡಂದಲೆದ ನಾರಾಯಣ ಟೈಲರ್ ಹೀಗಂದಾಗ ತಲೆಯಾಡಿಸಿದವನಿಗೆ ಆವತ್ತು ಗ್ಯಾರೇಜಿನ ಧಣಿ ಕೆಲಸ ಬಿಡುವಾಗ ಸ್ವಲ್ಪ ತಡ ಮಾಡಿದರು .
ಗಡಿಬಿಡಿಯಲ್ಲಿ ಅವರು ಹೇಳಿದ ಬಟ್ಟೆ ಹಿಡಿದು ರೈಲ್ವೆ ಸ್ಟೇಷನ್ ಗೆ ಓಡೋಡಿ ಬಂದವನಿಗೆ ಆಗ ತಾನೇ ಸ್ಟೇಷನ್ ಬಿಟ್ಟು ಒಂದಷ್ಟು ಫರ್ಲಾಂಗು ದೂರದಲ್ಲಿ ಹೋಗುತ್ತಿರುವ ರೈಲು ಕಾಣಿಸಿ ತಲೆ ತಿರುಗಿ ಬಂತು!
ಮಾಡೋದೇನು?
ಆ ದಿನಕ್ಕೆ ಇನ್ನು ಯಾವ ರೈಲೂ ಇಲ್ಲ! ಬೇರೆ ರೀತಿಯ ವ್ಯವಸ್ಥೆಯಲ್ಲಿ ಹೋಗಲು ಕೈಯಲ್ಲಿ ಚಿಕ್ಕಾಸು ಇಲ್ಲ !.
ಅಲ್ಲಿಯೇ ಇದ್ದ ಕೂಲಿಯವರೊಬ್ಬರು ರೈಲ್ವೆ ಹಳಿಯ ಪಕ್ಕದಲ್ಲೇ ನಡೆದುಕೊಂಡು ಹೋದರೆ ಸೀದಾ ಕೊಂಡಾಣಕ್ಕೆ ಹೋಗಬಹುದು ಎಂದು ಸಲಹೆ ನೀಡಿದರು .
ಯುವಕ ಯೋಚಿಸದೆ ನಡಿಗೆಗೆ ಸುರುವಿಟ್ಟ . ಎಷ್ಟು ನಡೆದರೂ ಗಮ್ಯ ಸ್ಥಾನ ಬಹುದೂರ . ಕತ್ತಲಾಗುತ್ತಾ ಬಂದಂತೆ ಈ ಯುವಕನಿಗೆ ದಾರಿ ಕಾಣುವುದು ಕಷ್ಟವಾಗುತ್ತೆ . ಅಷ್ಟರಲ್ಲಿ ದೂರದಲ್ಲಿ ಯಾರೋ ಲಾಟೀನು ಹಿಡಿದ ವ್ಯಕಿ ಕಾಣುತ್ತಾರೆ . ಅವರಲ್ಲಿ ವಿಚಾರಿಸಿದರೆ ಆತ ರೈಲ್ವೆ ಟ್ರ್ಯಾಕ್ ಚೆಕ್ ಮಾಡುವ ವ್ಯಕ್ತಿ , ಬಾ ನನ್ನ ಜೊತೆ ಎಂದು ಆತ ಕೋಟೆಕಾರ್ ವರೆಗೆ ತಂದು ಬಿಡುವಾಗ ರಾತ್ರಿ 8 ಗಂಟೆ . ಕೊಂಡಾಣ ತಲುಪಲು ಇನ್ನೂ ಮೂರು km ನಡೆಯುವದು ಬಾಕಿಯಿದೆ ಎಂದಾಗ
Comments
Post a Comment